Tuesday, 26 January 2016

ಬಸವಣ್ಣ ವಚನ ೨೯

ಕಾಯವಿಕಾರ ಕಾಡಿಹುದಯ್ಯ! ಮನೋವಿಕಾರ ಕೂಡಿಹುದಯ್ಯ! ಇಂದ್ರಿಯವಿಕಾರ ಸುಳಿದಿಹುದಯ್ಯ! ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ! ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ! ಅನುಪಮಸುಖ ಸಾರಾಯ ಶರಣರಲ್ಲಿ, ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

ಬಸವಣ್ಣ ವಚನ ೨೮

ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ? ಅಕಟಕಟ, ಮದನಂಗೆ ಮಾರುಗೊಡುವರೆ ? ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ? ಕೂಡಲಸಂಗಮದೇವ ?

ಬಸವಣ್ಣ ವಚನ ೨೭

ವಚನದ ಹುಸಿ-ನುಸುಳೆಂತು ಮಾಬುದೆನ್ನ ? ಮನದ ಮರ್ಕಟತನವೆಂತು ಮಾಬುದೆನ್ನ ? ಹೃದಯದ ಕಲ್ಮಷವೆಂತು ಮಾಬುದೆನ್ನ ? ಕಾಯವಿಕಾರಕ್ಕೆ ತರಿಸಲುವೋದೆನು! ಎನಗಿದು ವಿಧಿಯೇ, ಕೂಡಲಸಂಗಮದೇವ ?